ಮೀಸಲಾತಿ ಸಿಕ್ಕರೆ ಅಭಿನಂದನಾ ಸಮಾರಂಭ, ಸಿಗದಿದ್ರೆ ಧರಣಿ : ಮೃತ್ಯುಂಜಯ ಸ್ವಾಮೀಜಿ
1 min readಚಿಕ್ಕಮಗಳೂರು : ಮೀಸಲಾತಿ ಸಿಕ್ಕರೆ ಅಭಿನಂದನಾ ಸಮಾರಂಭ, ಸಿಗದಿದ್ರೆ ಧರಣಿ ಮುಂದುವರಿಕೆ ಅನಿವಾರ್ಯ ಎಂದು ಚಿಕ್ಕಮಗಳೂರಿನಲ್ಲಿ ಸರ್ಕಾರಕ್ಕೆ ಜಯ ಮೃತ್ಯುಂಜಯ ಸ್ವಾಮೀಜಿ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.
ಪಂಚಮಸಾಲಿ ಲಿಂಗಾಯಿತ ಸಮುದಾಯಕ್ಕೆ 2ಎ ಮೀಸಲಾತಿ ಹೋರಾಟ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಸರ್ಕಾರ ಕೇಳಿದ ಅವಧಿಯೊಳಗೆ ಮೀಸಲಾತಿ ಸಿಗುತ್ತೆ ಎಂಬ ನಂಬಿಕೆ ಇದೆ, ಕೊಡುವುದು ತಡವಾದರೆ ಅಂದೇ ನಿಂತ ಧರಣಿ ಮತ್ತೆ ಆರಂಭವಾಗುತ್ತದೆ. ಮುಖ್ಯಮಂತ್ರಿ ಬೊಮ್ಮಾಯಿ ಮೇಲೆ ಸಂಪೂರ್ಣ ವಿಶ್ವಾಸವಿದೆ, ನಮ್ಮ ಪಾದಯಾತ್ರೆಗೆ ಬೆಂಬಲ ಕೊಟ್ಟ ಸಚಿವರಲ್ಲಿ ಬೊಮ್ಮಾಯಿ ಕೂಡ ಒಬ್ರು, ಈ ಸಮುದಾಯದ ಕಷ್ಟ-ಸುಖ-ನೋವು, ವಿದ್ಯಾರ್ಥಿಗಳ ಬವಣೆ ಅವರಿಗೆ ಗೊತ್ತು, ಅವರೇ ಬಂದು ಆಶೀರ್ವಾದ ಪಡೆದು ವಿಶ್ವಾಸವಿಡಿ ಮಾಡಿಕೊಡ್ತೇವೆ ಎಂದಿದ್ದಾರೆ, ನಮ್ಮ ಅಭಿಯಾನ 1ನೇ ತಾರೀಖು ಬೆಂಗಳೂರು ತಲುಪುತ್ತೆ, ಅಂದು ಮೀಸಲಾತಿ ಸಿಕ್ಕರೆ ಅಭಿನಂದನಾ ಸಮಾರಂಭ, ಸಿಗದಿದ್ರೆ ಧರಣಿ ಮುಂದುವರಿಕೆ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g