ಮರದ ಕಂಬದಲ್ಲಿ ವಿದ್ಯುತ್ ಜೀವಂತ, ಕಂಬ ಬದಲಿಸುವಂತೆ ಸ್ಥಳಿಯರ ಆಗ್ರಹ
1 min read
ಚಿಕ್ಕಮಗಳೂರು : ಈಗಾಗಲೇ ಸರ್ಕಾರ ವಿದ್ಯುತ್ ದರವನ್ನ ಹೆಚ್ಚಿಸಿರುವುದು ಗ್ರಾಹಕರಿಗೆ ಬರೆ ಎಳೆದಂತಾಗಿದೆ. ಸರ್ಕಾರ ವಿದ್ಯುತ್ ದರ ಹೆಚ್ಚಿಸಲು ಮುಂದಾಯಿತೆ ವಿನಃ ವಿದ್ಯುತ್ ಕಂಬಗಳನ್ನ ಬದಲಿಸುವ ಯೋಚನೆ ಮಾಡಿಲ್ಲ ಎಂದು ಸ್ಥಳಿಯರು ವಿದ್ಯುತ್ ಇಲಾಖೆ ವಿರುದ್ಧ ಕಿಡಿಕಾರಿದ್ದಾರೆ. ಏಕೆಂದರೆ, ಚಿಕ್ಕಮಗಳೂರು ತಾಲೂಕಿನ ಐದಲ್ಲಿ ಗ್ರಾಮದ ಮಂಜುನಾಥ್ ಎಂಬುವರ ಮನೆ ಬಳಿ ಇನ್ನೂ ಮರದ ಕಂಬದಲ್ಲೇ ವಿದ್ಯುತ್ ಸಂಪರ್ಕವನ್ನ ಜೀವಂತವಾಗಿ ಇರಿಸಲಾಗಿದೆ. ಈ ಕಂಬದಲ್ಲಿ ಆಗಾಗ್ಗೆ ವಿದ್ಯುತ್ ಕೂಡ ಪಾಸ್ ಆಗುತ್ತಿದ್ದು ಸ್ಥಳಿಯರು ಆತಂಕಕ್ಕೀಡಾಗಿದ್ದಾರೆ. ವಿದ್ಯುತ್ ತಂತಿಗಳು ಕೂಡ ಕೈಗೆ ಸಿಗುವಂತಿದ್ದು ಏನಾದರೂ ಅನಾಹುತ ಸಂಭವಿಸಿದರೆ ಹೊಣೆ ಯಾರೆಂದು ಸ್ಥಳಿಯರು ಮೆಸ್ಕಾಂ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ಭಾಗದಲ್ಲಿ ಹೊಲಗದ್ದೆ-ತೋಟಗಳಿಗೆ ಹೋಗುವ ಜನಸಾಮ್ಯಾನರು ಇದೇ ಕಂಬದ ಬಳಿಯಿಂದಲೇ ಹೋಗಬೇಕು. ಏನಾದರೂ ಅನಾಹುತ ಸಂಭವಿಸುವ ಮುನ್ನವೇ ಮೆಸ್ಕಾಂ ಎಚ್ವೆತ್ತುಕೊಳ್ಳಬೇಕೆಂದು ಸ್ಥಳಿಯರು ಮನವಿ ಮಾಡಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g