ಲೋಕಸಭಾ ಚುನಾವಣೆ ಬಹಿಷ್ಕರಿಸಲು ನಿರ್ಧಾರ: ರೈತ ಮುಖಂಡ ಕೃಷ್ಣೆಗೌಡ
1 min readಚಿಕ್ಕಮಗಳೂರು: 30ವರ್ಷ ಕಳೆದರು ಇನ್ನೂ ಮುಗಿಯದ ಮಳಲೂರು ಏತ ನೀರಾವರಿ ಕಾಮಗಾರಿ ಶೀಘ್ರ ಪೂರ್ಣಗೊಳಿಸದಿದ್ದರೆ ಮುಂದಿನ ಲೋಕಸಭಾ ಚುನಾವಣೆ ಬಹಿಷ್ಕರಿಸುವುದಾಗಿ ಕರ್ನಾಟಕ ರೈತ ಸಂಘ ಎಚ್ಚರಿಸಿದೆ.
7 ಶಾಸಕರು ಆಯ್ಕೆ ಆಗಿದ್ದಾರೆ, ಪ್ರಸ್ತುತ ಗೆದ್ದಿರುವ ಎಂ.ಎಲ್.ಎ ಗೆಲ್ಲಿಸಿದ್ದು ಕೂಡಾ ಮಳಲೂರು ಏತ ನೀರಾವರಿ ಕೆಲಸ ಮಾಡಿಸುತ್ತಾರೆ ಅಂತ, ಆದರೆ ಅಂಬಳೆ ಹೋಬಳಿಯ ಹತ್ತಾರು ಗ್ರಾಮಗಳ ಯೋಜನೆ ಪ್ರಭಾವಿತ ರೈತರಿಗೆ ಮಾತ್ರ ಮಳಲೂರು ಏತ ನೀರಾವರಿ ಕಾಮಗಾರಿ ಮಾತ್ರ ಅಲ್ಲೇ ನಿಂತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಬೇಸರ ವ್ಯಕ್ತಪಡಿಸಿದೆ. ಒಂದು ತಿಂಗಳು ಗಡುವು ನೀಡಿರುವ ರೈತ ಮುಖಂಡರು ಅಷ್ಟರೊಳಗೆ ಬಾಕಿ ಕಾಮಗಾರಿ ಕೈಗೆತ್ತಿಕೊಳ್ಳದಿದ್ದರೆ ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಮನೆ ಮುಂದೆ ಅನಿರ್ದಿಷ್ಟವಾಗಿ ಚಳುವಳಿ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಗೆ ಮತ ಕೇಳಲು ಬಂದರೆ ಚೀಮಾರಿ ಹಾಕುತ್ತೇವೆ ಮತದಾನ ಬಹಿಷ್ಕಾರ ಹಾಕುತ್ತೇವೆ ಎಂದು ರೈತ ಸಂಘದ ರಾಜ್ಯ ಪದಾಧಿಕಾರಿ ಕೃಷ್ಣೇಗೌಡ ಎಚ್ಚರಿಕೆ ನೀಡಿದರು. ಮಳಲೂರು ಏತ ನೀರಾವರಿ ಕಾಮಗಾರಿ ಜಾರಿ ಯಿಂದ ಭೂಮಿ ಕಳೆದುಕೊಂಡವರಿಗೆ ಇನ್ನೂ ಪರಿಹಾರ ಕೊಟ್ಟಿಲ್ಲ, ಜಮೀನು ಹದಗೆಟ್ಟು ಹೋಗಿದೆ, ಮಾನವೀಯತೆ ಇಲ್ಲದ ರಾಜಕಾರಣಿಗಳು ನಮ್ಮ ಮಕ್ಕಳು ನಗರಕ್ಕೆ ಹೋಗಿ ಹೊಟೆಲ್ ಗಳಲ್ಲಿ ಲೋಟ ತೊಳೆಯುವಂತೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g