May 20, 2024

MALNAD TV

HEART OF COFFEE CITY

ಡಿ. 9 ರಂದು ರಾಷ್ಟ್ರಾದ್ಯಂತ ಬೃಹತ್ ಲೋಕ್ ಅದಾಲತ್: ನ್ಯಾಯಾಧೀಶೆ ಶುಭಾ ಗೌಡರ್

1 min read

ಚಿಕ್ಕಮಗಳೂರು: ಡಿಸೆಂಬರ್ 9 ರಂದು ರಾಷ್ಟ್ರಾದ್ಯಂತ ಬೃಹತ್ ಲೋಕ್ ಅದಾಲತ್ ನಡೆಯಲಿದ್ದು ಕಕ್ಷಿದಾರರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶುಭಾಗೌಡರ್ ತಿಳಿಸಿದರು.
ಇದೇ ಡಿಸೆಂಬರ್ 9 ರಂದು ಜಿಲ್ಲೆಯ ಎಲ್ಲಾ ತಾಲ್ಲೂಕು ನ್ಯಾಯಾಲಯಗಳಲ್ಲಿ ಲೋಕ್ ಅದಾಲತ್ ನಡೆಯಲಿದೆ, ಜಿಲ್ಲೆಯಲ್ಲಿ ಒಟ್ಟು 33790 ಪ್ರಕರಣಗಳು ಬಾಕಿ ಇದ್ದು, ಇವುಗಳಲ್ಲಿ ಸಂಧಾನಕ್ಕೆ 12320 ಗುರುತಿಸಲಾಗಿದೆ. ಅವುಗಳಲ್ಲೂ 4573 ಕೇಸ್ ಗಳನ್ನು ರಾಜಿ ಸಂಧಾನಕ್ಕೆ ಅಂತಿಮವಾಗಿ ಕೈಗೆತ್ತಿಕೊಳ್ಳಲಾಗುದು ಎಂದು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರಾದ ಶುಭಾ ಗೌಡರ್ ಹೇಳಿದರು. ನಗರದ ಜಿಲ್ಲಾ ನ್ಯಾಯಾಲಯದ ಎ.ಡಿ.ಆರ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಕಕ್ಷಿದಾರರು ಲೋಕ್ ಅದಾಲತ್ ನ ಪ್ರಯೋಜನ ಪಡೆದುಕೊಂಡು ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಬೇಕು ಎಂದರು. ಅಲ್ಲದೇ ಗ್ರಾಮೀಣ ಪ್ರದೇಶದಿಂದ ಆಗಮಿಸಲು ಸಾಧ್ಯವಾಗದ ಕಕ್ಷಿದಾರರು ವರ್ಚುವಲ್ ಮೂಲಕವೂ ಅದಾಲತ್ ನಲ್ಲಿ ಭಾಗವಹಿಸಬಹುದು ಎಂದು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿ ಯಲ್ಲಿ ನ್ಯಾಯಾಧೀಶರಾದ ಸೋಮಾ, ವಕೀಲರ ಸಂಘದ ಅಧ್ಯಕ್ಷ ಎಚ್.ಎಂ ಸುಧಾಕರ್ ಉಪಸ್ಥಿತರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!