ಕೋವಿಡ್ ೨ ನೇ ಅಲೆ ಎದುರಿಸಲು ಬಿ.ಜೆ.ಪಿ. ಪಕ್ಷದಿಂದ ಸಾರ್ವಜನಿಕರಿಗೆ ಮಾಹಿತಿ ದೃಷ್ಠಿಯಿಂದ ೧೧ ವಿಭಾಗಗಳ ರಚನೆ
1 min readಕೋವಿಡ್ ೨ ನೇ ಅಲೆ ಎದುರಿಸಲು ಬಿ.ಜೆ.ಪಿ. ಪಕ್ಷದಿಂದ ಸಾರ್ವಜನಿಕರಿಗೆ ಮಾಹಿತಿ ದೃಷ್ಠಿಯಿಂದ ೧೧ ವಿಭಾಗಗಳ ರಚನೆ
ಕೋವಿಡ್ ೧೯ ರ ೨ ನೇ ಅಲೆಯಲ್ಲಿ ಸಾಮಾಜಿಕವಾಗಿ ಸೇವೆ ಮಾಡಲು ೧೧ ವಿಭಾಗಗಳನ್ನು ರಚನೆ ಮಾಡಲಾಗಿದೆ. ಪ್ರತಿ ವಿಭಾಗಕ್ಕೂ ಸಂಚಾಲಕರು ಮತ್ತು ಸಹ ಸಂಚಾಲಕರುಗಳನ್ನು ನೇಮಿಸಲಾಗಿದೆ ಎಂದು ಬಿ.ಜೆ.ಪಿ. ಪಕ್ಷದ ಜಿಲ್ಲಾ ವಕ್ತಾರರಾದ ವರಸಿದ್ದಿ ವೇಣುಗೋಪಾಲ್ ಹೇಳಿದ್ರು
ಅವರು ಇಂದು ಸುದದಿಗೋಷ್ಠಿಯಲ್ಲಿ ಮಾತನಾಡುತ್ತ ಕಳೆದ ವರ್ಷಕ್ಕೆ ಹೋಲಿಸಿದರೆ ಕೋವಿಡ್ ೧೯ ರ ೨ ನೇ ಅಲೆಯ ಹರಡುವಿಕೆಯ ವೇಗ ತೀವ್ರವಾಗಿದೆ. ಕಳೆದ ವರ್ಷ ಸೇವಾಹಿ ಸಂಘಟನ್ ಎಂಬ ಹೆಸರಿನಲ್ಲಿ ಬಿ.ಜೆ.ಪಿ. ಕಾರ್ಯಕರ್ತರು ವಿವಿಧ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಈ ಬಾರಿಯು ಸಾರ್ವಜನಿಕರಿಗೆ ಮಾಹಿತಿ ನೀಡುವ ದೃಷ್ಠಿಯಿಂದ ಆಸ್ಪತ್ರೆಯ ಮಾಹಿತಿ ವಿಭಾಗದ ಸಂಚಾಲಕರಾಗಿ ಬಿ.ಜಿ ಸೋಮಶೇಖರ್, ಅಂಬುಲೆನ್ಸ್ ವಿಭಾಗ ದೇವರಾಜ್ ಶೆಟ್ಟಿ, ಲಸಿಕೆ ವಿಭಾಗ ವಿಜಯ್ ಕುಮಾರ್, ವೆಂಟಿಲೆಟರ್ ವಿಭಾಗ ಕೆ.ಪಿ. ವೆಂಕಟೇಶ್, ಕಛೇರಿ ವಿಭಾಗ ಬಿ. ರಾಜಪ್ಪ, ಔಷಧಿ ವಿಭಾಗ ಸಿ.ಆರ್. ಪ್ರೇಮ್ ಕುಮಾರ್, ಆಯುಷ್ಮಾನ್ ಕಾರ್ಡ್ ವಿಭಾಗ ಜಸಂತ್ ಅನಿಲ್ ಕುಮಾರ್, ಅಂತ್ಯ ಸಂಸ್ಕಾರ ವಿಭಾಗ ಆನಂದ್ ಸಿ, ಸಾಮಾಜಿಕ ಅಂತರ ವಿಭಾಗ ಸಂಪತ್ ಕುಮಾರ್ ಹೆಡೆದಾಳ್, ಮಾಸ್ಕ್ ಧಾರಣೆ ವಿಭಾಗ ಹೆಚ್.ಡಿ. ತಮ್ಮಯ್ಯ, ಕಾಲ್ ಸೆಂಟರ್ ವಿಭಾಗಕ್ಕೆ ಚೇತನ್ ಶೆಟ್ಟಿ ಮತ್ತು ಈ ತಂಡಗಳ ಸಮನ್ವಯವನ್ನು ಜಿಲ್ಲಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಮಂಡಲ ಅಧ್ಯಕ್ಷರು, ಮಂಡಲ ಪ್ರಧಾನ ಕಾರ್ಯದರ್ಶಿಗಳು ಮತ್ತು ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರುಗಳ ತಂಡಗಳು ಜಿಲ್ಲಾಡಳಿತದೊಂದಿಗೆ ಕೆಲಸ ಮಾಡಲಿದೆ ಎಂದು ಹೇಳಿದ್ರು.
ಇದೇ ವೇಳೆ ಆಸ್ಪತ್ರೆಯ ಮಾಹಿತಿ ವಿಭಾಗದ ಸಂಚಾಲಕರಾದ ಬಿ.ಜಿ ಸೋಮಶೇಖರ್ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿರುವ ತುರ್ತು ನಿಗಾ ಘಟಕಗಳ ಬಗ್ಗೆ, ಆಮ್ಲಜನಕ ಪೂರೈಕೆಯ ಬಗ್ಗೆ ಮಾಹಿತಿ ನೀಡಿದರು.
ಸುದ್ದಿಗೋಷ್ಠೀಯಲ್ಲಿ ದೇವರಾಜ್ ಶೆಟ್ಟಿ, ವಿಜಯ್ ಕುಮಾರ್, ಕೆ.ಪಿ. ವೆಂಕಟೇಶ್, ಬಿ. ರಾಜಪ್ಪ, ಸಿ.ಆರ್. ಪ್ರೇಮ್ ಕುಮಾರ್, ಜಸಂತ್ ಅನಿಲ್ ಕುಮಾರ್, ಆನಂದ್ ಸಿ, ಸಂಪತ್ ಕುಮಾರ್ ಹೆಡೆದಾಳ್, ಹೆಚ್.ಡಿ. ತಮ್ಮಯ್ಯ, ಉಪಸ್ಥಿತರಿದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g