ತೆಂಗು ದಿನ ಆಚರಣೆ
1 min readಚಿಕ್ಕಮಗಳೂರು : ತೆಂಗು ದಿನಾಚರಣೆಯನ್ನು ನಗರದ ಸೇಂಟ್ ಮೇರಿಸ್ ಪದವಿ ಪೂರ್ವ ಕಾಲೇಜಿನಲ್ಲಿ ಆಚರಿಸಲಾಯಿತು.
ತೆಂಗು ದಿನಾಚರಣೆ ಮುಖ್ಯ ಅತಿಥಿಗಳಾಗಿದ್ದ ನಾರಾಯಣಪುರ ಚಂದ್ರಶೇಖರ್ ಮಾತನಾಡುತ್ತ ಸಹಜ ಕೃಷಿ ಪದ್ದತಿಯು ಈಗಿನ ಸಂದರ್ಭದಲ್ಲಿ ಅತ್ಯವಶ್ಯಕವಾಗಿದ್ದು, ನಮ್ಮ ಹಿಂದಿನ ಕಾಲದ ಕೃಷಿ ಪದ್ದತಿಗಳಿಗೆ ಹಿಂದಿರುಗಬೇಕಿದೆ. ಸ್ವಾತಂತ್ರ್ಯ ಆರಂಭದಲ್ಲಿ ಮಾಡಿದ ಹಸಿರು ಕ್ರಾಂತಿ ಹಾಗೂ ಕ್ಷೀರ ಕ್ರಾಂತಿಯ ಪರಿಣಾಮ ನಮ್ಮ ಭೂಮಿಯ ಸತ್ವ ಹಾಳಾಗಿ ಹೋಗಿದ್ದು, ಭೂಮಿಯ ತಾಪಮಾನ ಏರಿಕೆಯಾಗಿ ಅಪಾಯದ ಹಂತಕ್ಕೆ ತಲುಪಿದ್ದು, ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಾದ ತಾವುಗಳು ಈ ಭೂಮಿಯ ಸತ್ವ ಉಳಿಸಲು ಮುಂದಾಗಬೇಕೆಂದು ಕರೆ ನೀಡಿದರು.
ಇದೇ ವೇಳೆ ತೆಂಗು ದಿನಾಚರಣೆ ಅಂಗವಾಗಿ ಕಾಲೇಜು ಮಕ್ಕಳಿಗೆ ಏರ್ಪಡಿಸಿದ್ದ ತೆಂಗಿನ ಖಾದ್ಯ ಸ್ಪರ್ಧೆ, ಸೇರಿದಂತೆ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g