ಟೋಯಿಂಗ್ ವೇಳೆ ಚಲಿಸುತ್ತಿದ್ದ ಕಾರಿಗೆ ತಗುಲಿದ ಬೆಂಕಿ : ಅದೃಷ್ಟವಶಾತ್ ನಾಲ್ವರು ಪಾರು
1 min read![](https://www.malnadtv.com/wp-content/uploads/2024/05/Screenshot_20240522-090446.png)
ಅಪಘಾತವಾಗಿದ್ದ ಕಾರನ್ನು ಟೋಯಿಂಗ್ ಮೂಲಕ ಎಳೆದೊಯ್ಯುವಾಗ ರಸ್ತೆ ಪಕ್ಕದಲ್ಲಿ ಹಾಕಿದ್ದ ಟಿಂಬರ್ ಮರಗಳಿಗೆ ಢಿಕ್ಕಿ ಹೊಡೆದು ಕಾರು ಸಂಪೂರ್ಣ ಭಸ್ಮವಾದ ಘಟನೆ ಕಳಸ ತಾಲೂಕಿನ ಸಂಸೆ ಸಮೀಪದ ಬಾಲ್ಗಲ್ ಬಳಿ ನಡೆದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಸ್ತೆ ಮಧ್ಯೆ ಧಗ-ಧಗ ಹೊತ್ತಿ ಉರಿದು ಕಾರೊಂದು ಸಂಪೂರ್ಣ ಭಸ್ಮವಾಗಿದೆ. ಅಪಘಾತವಾಗಿದ್ದ ಕಾರನ್ನ ಟೋಯಿಂಗ್ ಮೂಲಕ ಎಳೆದೊಯ್ಯುವಾಗ ಅವಘಡ ಸಂಭವಿಸಿದೆ. ಅಪಘಾತವಾಗಿದ್ದ ಕಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ
ರಸ್ತೆ ಮಧ್ಯೆ ಧಗ-ಧಗ ಉರಿದು, ಕಾರು ಸುಟ್ಟು ಕರಕಲಾಗಿದೆ. ಕಳಸ ತಾಲೂಕಿನ ಸಂಸೆಯ ಬಾಲ್ಗಲ್ ಬಳಿ ಘಟನೆ ನಡೆದಿದ್ದು, ಅಪಘಾತವಾದ ಕಾರನ್ನ ಮಂಗಳೂರಿಗೆ ಎಳೆದೊಯ್ಯುವ ವೇಳೆ ದುರ್ಘಟನೆ ಸಂಭವಿಸಿದೆ, ಕಳಸ ತಾಲೂಕಿನ ಸಂಸೆಯ ಬಾಲ್ಗಲ್ ತಿರುವಿನಲ್ಲಿ ಅಪಘಾತವಾಗಿ ಕಾರು ಕೆಟ್ಟು ನಿಂತಿತ್ತು. ಘಟನೆ ನಡೆದ ಸ್ಥಳದಿಂದ ಸ್ವಲ್ಪ ದೂರಕ್ಕೆ ಎಳೆಯುತ್ತಿದ್ದಂತೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ರಸ್ತೆ ಪಕ್ಕದಲ್ಲಿ ಇದ್ದ ಟಿಂಬರ್ ಮರಗಳಿಗೆ ಡಿಕ್ಕಿ ಹೊಡೆದಿದ್ದ ಕಾರಿನಲ್ಲಿ ಅಗ್ನಿ ಸ್ಪರ್ಷಿಸಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ಜರುಗಿದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g