ನಿಡುವಾಳೆಯಲ್ಲಿ ಬಾವಿಗೆ ಬಿದ್ದ ಹಸು ಸಾವು
1 min read
ಕೊಟ್ಟಿಗೆಹಾರ:ನಿಡುವಾಳೆ ಗ್ರಾ.ಪಂ ಎದುರು ಇರುವ ಸಾರ್ವಜನಿಕರ ಬಾವಿಯೊಳಗೆ ಗುರುವಾರ ಹಸುವೊಂದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಬಾವಿಯಲ್ಲಿ ಮುಚ್ಚಳಿಕೆ ಇದ್ದರೂ ಕೂಡ ಹಸು ಬಿದ್ದ ರಭಸಕ್ಕೆ ಮುಚ್ಚಳಿಕೆ ಕಳಚಿಕೊಂಡು ಹಸು ಬಾವಿಯೊಳಗೆ ಬಿದ್ದಿದ್ದು ಸ್ಥಳೀಯರು ಹಾಗೂ ಜಾವಳಿ ಶೌರ್ಯ ವಿಪತ್ತು ನಿರ್ವಹಣ ಘಟಕದ ಕಾರ್ಯಕರ್ತರು ಕಾರ್ಯಚರಣೆ ನಡೆಸಿ ಬಾವಿಯಿಂದ ಮೇಲೆತ್ತಿದ್ದರು. ಆದರೆ ಆ ವೇಳೆಗೆ ಹಸು ಮೃತಪಟ್ಟಿತ್ತು.
ಆ ನಂತರ ಹಸುವಿನ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಶೌರ್ಯ ವಿಪತ್ತು ನಿರ್ವಹಣ ಘಟಕದ ಸಂಯೋಜಕರಾದ ಸಾಗರ್ ಮರ್ಕಲ್, ಆರೀಪ್ ಬಣಕಲ್, ಸೋಮಶೇಖರ್, ಸಂಜೀವ, ಮಹೇಶ, ಅಶೋಕ್, ನವೀನ್, ನಿಡುವಾಳೆ ಗ್ರಾ.ಪಂ ಅಧ್ಯಕ್ಷೆ ಶೃತಿ, ಉಪಾಧ್ಯಕ್ಷ ನವೀನ್ ಹಾವಳಿ, ಸದಸ್ಯರರಾದ ಸಚಿನ್ ಮರ್ಕಲ್, ಮುಂತಾದವರು ಇದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g