ತಾಯಿಯ ರಕ್ಷಣೆಗಾಗಿ ಬಂದ ಪೊಲೀಸನ ಮೇಲೆಯೇ ಮಗನಿಂದ ಮಾರಣಾಂತಿಕ ಹಲ್ಲೆ.!
1 min read
ಚಿಕ್ಕಮಗಳೂರು: ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಜಗಳ ಬಿಡಿಸಲು ಹೋದ ಹೆಡ್ ಕಾನ್ಸ್ಟೆಬಲ್ ಮೇಲೆ ಡ್ಯಾಗರ್ನಿಂದ ಹಲ್ಲೆ ನಡೆಸಿರುವ ಘಟನೆ ಮಾಸುವ ಮುನ್ನವೇ, ಹೆತ್ತ ಮಗ ನನ್ನ ಮೇಲೆ ದೌರ್ಜನ್ಯ ಮಾಡುತ್ತಿದ್ದಾನೆ ನನ್ನನ್ನು ಕಾಪಾಡಿ ಎಂದು 112ಗೆ ಕರೆ ಮಾಡಿದ ಮಹಿಳೆಯ ರಕ್ಷಣೆಗೆ ಹೋಗಿದ್ದ ಕರ್ತವ್ಯ ನಿರತ ಹೆಡ್ ಕಾನ್ಸ್ಟೆಬಲ್ ಮೇಲೆ ಹಲ್ಲೆ ನಡೆದಿರುವ ಘಟನೆ ಚಿಕ್ಕಮಗಳೂರಿನ ಉಪ್ಪಳ್ಳಿಯಲ್ಲಿ ನಡೆದಿದೆ. ಚಿಕ್ಕಮಗಳೂರು ಟೌನ್ ಪೋಲಿಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೆಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ದಿನೇಶ್ ಕುಮಾರ್ ಎಂಬುವರು ಬುಧವಾರ ರಾತ್ರಿ 112 ವಾಹನದಲ್ಲಿ ಕರ್ತವ್ಯದಲ್ಲಿರಬೇಕಾದರೆ. ನಗರದ ಉಪ್ಪಳ್ಳಿಯ ನಿವಾಸಿ ಆಕ್ತರ್ ಉನ್ನಿಸಾ ಎಂಬುವರು ತಮ್ಮ ಮನೆಯಲ್ಲಿ ಜಗಳವಾಗುತ್ತಿರುವ ಕುರಿತು 112 ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕಂಟ್ರೋಲ್ ರೂಮ್ ನಿಂದ ಬಂದ ಮಾಹಿತಿಯ ಮೇರೆಗೆ ಸ್ಥಳಕ್ಕೆ ತೆರಳಿದ ಹೆಡ್ ಕಾನ್ಸ್ಟೆಬಲ್ ದಿನೇಶ್ ಕುಮಾರ್ ಗಲಾಟೆಯ ಕುರಿತು ಮಾಹಿತಿ ಪಡೆಯುವ ಸಂದರ್ಭದಲ್ಲಿ ಆಕ್ತರ್ ಉನ್ನಿಸಾ ಪುತ್ರ ಮಹಮದ್ ಜಾಫರ್ ಸಾದಿಕ್ ಏಕಾಏಕಿ ಅವಾಚ್ಯವಾಗಿ ನಿಂದಿಸಿ ಹೆಡ್ ಕಾನ್ಸ್ಟೆಬಲ್ ದಿನೇಶ್ ಕುಮಾರ್ ಅವರ ಸಮವಸ್ತ್ರವನ್ನು ಹಿಡಿದು ಎಳೆದಾಡಿ ಹೂವಿನ ಪಾಟ್ ನಿಂದ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಈ ವೇಳೆ ದಿನೇಶ್ ಕುಮಾರ್ ಜೊತೆಯಲ್ಲಿದ್ದ ವಾಹನದ ಚಾಲಕ ಅಣ್ಣಪ್ಪ ಗಲಾಟೆ ಬಿಡಿಸಿದ್ದಾರೆ. ಗಾಯಗೊಂಡ ದಿನೇಶ್ ಕುಮಾರ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಹಲ್ಲೆ ನಡೆಸಿದ ಮಹಮದ್ ಜಾಫರ್ ಸಾದಿಕ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g

