December 9, 2025

MALNAD TV

HEART OF COFFEE CITY

ಸುಹಾಸ್ ಶೆಟ್ಟಿ ಪ್ರಕರಣ ಕಳಸಕ್ಕೆ ಎನ್ಐಎ ಅಧಿಕಾರಿಗಳ ಭೇಟಿ.!

1 min read

 

 

 

 

 

 

 

 

 

 

 

ಚಿಕ್ಕಮಗಳೂರು.: ಮಂಗಳೂರು ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಸಂಬಂಧ ಎನ್.ಐ.ಎ. ಅಧಿಕಾರಿಗಳು ಕಾಫಿನಾಡ ಕಳಸದಲ್ಲೂ ಮಾಹಿತಿ ಕಲೆ ಹಾಕಿದ್ದಾರೆ. ಕಳಸ ತಾಲೂಕಿನ ಕೋಟೆಹೊಳೆ ಹಾಗೂ ರುದ್ರಪಾದಕ್ಕೆ ಭೇಟಿ ನೀಡಿದ್ದ ಎನ್.ಐ.ಎ. ಅಧಿಕಾರಿಗಳು ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಇಬ್ಬರು ಆರೋಪಿತರ ಮನೆಗೂ ಭೇಟಿ ನೀಡಿದ್ದಾರೆ. ಮರ್ಡರ್ ಪ್ರಕರಣ ಸಂಬಂಧ ಕಳಸ ಸಮೀಪದ ಹೋಂ ಸ್ಟೇ ಒಂದರಲ್ಲಿ ಆರೋಪಿತರೆಲ್ಲರೂ ವಾಸ್ತವ್ಯದ ಅನುಮಾನದ ಹಿನ್ನೆಲೆ ಅಧಿಕಾರಿಗಳು ಭೇಟಿ, ಕೆಲವೊಂದು ಮಾಹಿತಿ ಕಲೆ ಹಾಕಿದ್ದಾರೆ. ಕೊಲೆ ಪ್ರಕರಣ ಸಂಬಂಧ ಪೊಲೀಸರು ಬಂಧಿಸಿದ್ದ ಎಂಟು ಆರೋಪಿಗಳ ಪೈಕಿ ಇಬ್ಬರು ಯುವಕರು ಚಿಕ್ಕಮಗಳೂರು ಜಿಲ್ಲೆ ಕಳಸ ಪಟ್ಟಣದವರಾಗಿದ್ದರು. ಕಳಸ ಪಟ್ಟಣದ ರಂಜಿತ್ ಹಾಗೂ ಕೋಟೆಹೊಳೆಯ ನಾಗರಾಜ್ ಎಂಬ ಇಬ್ಬರು ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ಇಬ್ಬರು ಯುವಕರು ಕಳಸ ಪಟ್ಟಣದಲ್ಲಿ ಶಾಮಿಯಾನ ಹಾಕುವ ಕೆಲಸ ಮಾಡುತ್ತಿದ್ದರು. ಕುಡಿತದ ಚಟಕ್ಕೆ ಒಳಗಾಗಿದ್ದ ಈ ಇಬ್ಬರು ನಿತ್ಯ ಕುಡಿಯುತ್ತಿದ್ದರು. ಸುಹಾಸ್ ಶೆಟ್ಟಿ ಕೊಲೆಗೂ ಒಂದು ತಿಂಗಳ ಹಿಂದಷ್ಟೇ ಕೆಲಸ ಬಿಟ್ಟು ಮಂಗಳೂರು ಸೇರಿಕೊಂಡಿದ್ದರು ಎನ್ನಲಾಗಿತ್ತು.‌ ಕಾಫಿನಾಡ ಈ ಇಬ್ಬರು ಯುವಕರು ಕೊಲೆ ಪ್ರಕರಣದ ಎ2 ಆರೋಪಿಯಾಗಿದ್ದ ನಿಯಾಜ್ ಸ್ನೇಹಿತರಾಗಿದ್ದರು ಎನ್ನಲಾಗಿತ್ತು. ನಿಯಾಜ್ ನ ಸಂಬಂಧಿಕರು ಕಳಸದಲ್ಲಿರುವುದರಿಂದ ಆಗಾಗ ನಿಯಾಜ್ ಕಳಸಕ್ಕೆ ಬರ್ತಿದ್ದ. ಹಾಗಾಗಿ, ಕಳೆದ ಮೂರು ವರ್ಷಗಳಿಂದ ನಿಯಾಜ್, ರಂಜಿತ್ ಹಾಗೂ ನಾಗರಾಜ್ ಸ್ನೇಹಿತರಾಗಿದ್ದರು ಎಂದು ಹೇಳಲಾಗಿತ್ತು. ಅಲ್ಲದೇ ಇವರೆಲ್ಲರೂ ಸೇರಿಕೊಂಡು ಕೊಲೆಗೂ ಮುನ್ನ ತಿಂಗಳ ಹಿಂದೆ ಕಳಸ ಸಮೀಪದ ಲಾಡ್ಜ್ ಒಂದರಲ್ಲಿ ಪಾರ್ಟಿ ಮಾಡಿದ್ದರಂತೆ. ಈ ಪಾರ್ಟಿ ಮುಗಿಸಿ ರಂಜಿತ್ ಹಾಗೂ ನಾಗರಾಜ್ ಕಳಸದಿಂದ ಮಂಗಳೂರಿಗೆ ಹೋಗಿದ್ದರು ಎಂದು ಹೇಳಲಾಗಿತ್ತು. ಇದೀಗ ಕೊಲೆ ಪ್ರಕರಣ ಸಂಬಂಧ ಎನ್.ಐ.ಎ. ಅಧಿಕಾರಿಗಳು ತನಿಖೆ ನಡೆಸುತ್ತಿರುವುದರಿಂದ ಎನ್.ಐ.ಎ. ಅಧಿಕಾರಿಗಳ ಕಳಸಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.

 

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!